ಜೀವದಲುಸಿರು ಇರುವಾಗ

ಜೀವದಲುಸಿರು ಇರುವಾಗ ನೋಡು ಕರುನಾಡು
ನಾಲಿಗೆ ನುಡಿಯುತಿರುವಾಗ ಕನ್ನಡವ ಹಾಡು /ಪ//

ಕನ್ನಡವ ಹಾಡು ಸಿರಿಗನ್ನಡವ ನೋಡು
ಚೆಲುಗನ್ನಡ ಬೀಡು ಅದರಿಂದಲೆ ಈ ಹಾಡು /ಅ.ಪ./

ಹುಟ್ಟಿದ ಕೋಗಿಲೆ ಹಾಡುವುದು ಕನ್ನಡ ಸ್ವರದಲ್ಲಿ
ಗಿರಿನವಿಲು ಗರಿ ಬಿಚ್ಚುವುದು ಅದರ ಮೇಳದಲಿ
ಮಲೆ ಸಹ್ಯಾದ್ರಿ ಬಾಗುವುದು ಕಾಣುವ ತವಕದಲಿ
ಸಾವಿರ ಕವಿತೆ ಬೀಗುವುದು ಸ್ಫೂರ್ತಿಯ ಪಡೆಯುತಲಿ /೧/

ಮಳೆಗಾಳಿಗೆ ಎದೆಯೊಡ್ಡಿಹುದು ಗೊಮ್ಮಟ ಸಹ್ಯಾದ್ರಿ
ಹೊಳೆಯಾಲಿಂಗನಕೊಪ್ಪಿಹುದು ಕರಾವಳಿಯ ಸಿರಿ
ಬಯಲನು ಬಿತ್ತಿ ಬೆಳೆದಿಹುದು ಬಯಲು ಬಾನು ಕಾನು
ಅಂತರಂಗ ಬಹಿರಂಗದಲಿ ಕಳೆದಿದೆ ನಾನು ನೀನು /೨/

ಸಾವಿರದಾಚೆ ನಮ್ಮ ಕತೆ ಸಾಮಾನ್ಯವೆ ಚರಿತೆ
ಸಾಗರದಾಚೆ ಹರಿದಿಹುದು ನಮ್ಮರಿವಿನ ಒರತೆ
ಆದರು ಕಂದಕ ಕಂಡಿಹುದು ಓಡುವ ನೆಲದಲ್ಲಿ
ಕಂದಕ ಮುಚ್ಚುವ ಬಗೆ ಗೊತ್ತು ಏಕತ ಭಾವದಲಿ /೩/
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಹಿ-ಕಹಿ
Next post ದಂಡ ಬಂತವ್ವಾ ದಂಡ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys